Sunday, September 12, 2010

ಮಲೆನಾಡಿನ ಮಳೆ....





ಬಹುಷಃ ಪ್ರತಿಯಾಬ್ಬ ಮನುಷ್ಯನಿಗೂ "ಮಲೆನಾಡು" ಎಂದರೆ ಮಳೆಯನ್ನು ಹೊರತು ಬೇರಾವ ನೆನಪು ಬರಲು ಸಾದ್ಯವಿಲ್ಲ.
ಹೌದು, ನನ್ನ ಇಂದಿನ ವಿಷಯ "ಮಲೆನಾಡ ಮಳೆ".

ಚಿಟ-ಪಟ ಸದ್ದಿನಿಂದ ಆರಂಭವಾಗಿ ಧೋ ಎಂಬ ತಾರಕಕ್ಕೇರಿ ಮತ್ತೆ ಚಿಟ-ಪಟದೊಂದಿಗೆ ಮುಕ್ತಾಯ. ಅದೊಂದು ಹೇಳಲಾರದ, ಮನಸ್ಸಿಗೆ ಮುದ ಕೊಡುವ ಪ್ರಕೃತಿಯ ಸುಂದರ ಪ್ರತಿಕ್ರಿಯೆ. ಮಳೆಯೇ ಹಾಗೆ ಎಂಥಹ ಕಲ್ಲು ಮನಸ್ಸಿನವರನ್ನು ಮೃದುವಾಗಿಸಿ ಬಿಡುತ್ತದೆ, ತನ್ನೊಳಗೆ ಅವರೂ ಹರ್ಷ ಪಡುವಂತೆ ಮಾಡುತ್ತದೆ. ಮನಸ್ಸು ಸೃಷ್ಟಿಯೋಡಲಲ್ಲಿ ಕುಣಿದು ಕುಪ್ಪಳಿಸುವಂತೆ ಮಾಡುತ್ತದೆ. ಮೊದ-ಮೊದಲ ತುಂತುರು ಮಳೆಯೊಂದಿಗೆ ಬರುವ ಆ ಮಣ್ಣಿನ ಪರಿಮಳಕ್ಕೆ ಆಧುನಿಕ ಜಗತ್ತಿನ ಯಾವೊಂದು ಪರಿಮಳ ದ್ರವ್ಯವು ಪೈಪೋಟಿ ನೀಡಲಾಗದು.

ಮಳೆ ಸುಂದರ ಪ್ರಕೃತಿಯ ವಿಶೇಷ ಪ್ರತಿಕ್ರಿಯೆಯಾದರೆ, ಮಳೆಗೆ ಮಲೆನಾಡಿನ ಜನರ ಪ್ರತಿಕ್ರಿಯೆಯೇ ಬೇರೆ. ಮಳೆಯಲ್ಲಿ ನೆನೆದು ಬಂದು ನಂತರ ಹಂಡೆಯಲ್ಲಿ ಬಿಸಿ ಬಿಸಿ ನೀರಿನ ಸ್ನಾನ ಮಾಡುವುದು. ಅದಾದ ಮೇಲೆ ಬೇಯಿಸಿದ ಹಲಸಿನ ಬೀಜ, ಹಲಸಿನ ಹಪ್ಪಳದೊಂದಿಗೆ ಕೈಗೂ ಬಾಯಿಗೂ ಕಚ್ಚಾಟ. ಹೊತ್ತಿಲ್ಲದ ಹೊತ್ತಿನಲ್ಲಿ ಬೆಚ್ಚಗೆ ಕಂಬಳಿ ಹೊದ್ದು ಮಲಗುವುದು. ಪ್ರಪಂಚದಲ್ಲಿ ಇದರಷ್ಟು ಸುಖ ಇನ್ನೊಂದಿಲ್ಲ.

ಇನ್ನು, ಮಳೆನಿಂತ ಮೇಲೆ ಹೇಳುವುದೇ ಬೇಡ, ಅದೊಂದು ವಿಭಿನ್ನ ಅನುಭವ. ಸುಂದರ ಹಸಿರು ಸೀರೆಯುಟ್ಟ ಯುವತಿಯಾಗಿರುತ್ತಾಳೆ "ನಿಸರ್ಗೆ". ಪ್ರತಿಯೊಂದು ಎಲೆಯ ಮೇಲೂ ಹನಿ ಹನಿಯಾಗಿ ಗುರುತು ಮೂಡಿಸಿಟ್ಟಿರುತ್ತಾಳೆ "ವರ್ಷಧಾರೆ".

ಆಧುನಿಕತೆ ಬೆಳೆದಂತೆ ಮನುಷ್ಯ ಮುಗ್ಧ ಪ್ರಪಂಚದಿಂದ ಪಟ್ಟಣದೆಡೆಗೆ ತನ್ನ ವಾಸ್ತವ್ಯ ಬದಲಿಸುತ್ತಿದ್ದಾನೆ. ದುರಾದೃಷ್ಟವಷತ್, ನಾವು-ನೀವು ಪ್ರತಿಯಾಬ್ಬರೂ ಆ ಮಲೆನಾಡ ವರ್ಷಧಾರೆಯ ಹರ್ಶೋದ್ಗಾರವನ್ನು ಕೇವಲ TVಯಲ್ಲಿ ವೀಕ್ಷಿಸುವಂತಾಗಿದೆ. 5 ನಿಮಿಷ ಸುರಿವ ತುಂತುರು ಮಳೆಯೊಂದಿಗೆ ನಮ್ಮ ಮನಸ್ಸು compromise ಆಗುವಂತಾಗಿದೆ. ಆದರೂ ಮಳೆ ಬರುವಾಗ ಮನಸ್ಸು ಮಲೆನಾಡ ಮಳೆಯನ್ನೇ ಯೋಚಿಸುತ್ತಿರುತ್ತದೆ,
"ಗಗನದಲಿ ಮಳೆಯದಿನ
ಗುಡುಗಿನ ತನನ
ಆ ತನನ ದಿನ ಧರಣಿಯಲಿ, ಹಸಿರಿನ ಜನನ...
ಮಲೆನಾಡಿನ ......
ಮಳೆ ಹಾಡಿನ .........
ಪಿಸುಮಾತಿನ..
ಹೊಸತನಾ... .
ಸವಿದೆನಾ ...... " ಎಂಬಂತೆ.

Saturday, July 31, 2010

ಮೌನ ಮಾತಾದಾಗ ..


ಈ ಹಾಡು ನಿನಗಾಗಿ ಸಂದೀಪ್ ..

Saturday, March 20, 2010

ಸಂದೀಪನೆಂಬ ಸುಂದರ ಸಂಜೆ....


ಒಂದು ವರ್ಷದ ಹಿಂದಿನ ಮಾತು...
ಮನದಾಳದಲ್ಲಿ ಮೂಡಿತೊಂದು ಬಹು ದೊಡ್ಡ ಪ್ರೆಶ್ನೆ ಯಾರಿವನು "ಸಂದೀಪ್"?...

ದಿನದಿಂದ ದಿನಕ್ಕೆ ಮನಸ್ಸಿನ ಪ್ರೆಶ್ನೆ ಸಡಿಲಿಸಿ... ಉತ್ತರ ನಾ ಕಂಡುಕೊಂಡೆ...

"ಸಂದೀಪ"ನೆಂದರೆ ಸಂಧ್ಯಾಕಾಲದ ಸುಂದರ ಪ್ರಕೃತಿ....
ಸೂರ್ಯ ಮುಳುಗುವ ಮುನ್ನ ಆಕಾಶವನ್ನೇ ಬಂಗಾರಮಯವಾಗಿಸಿ,
ಸುಂದರ ಸೃಷ್ಟಿಗೆ ಕೆಂಪಾದ ಮೆರುಗನ್ನು ನೀಡಿ,
ಮೋಡದಂಚಿಗೆ ಬೆಳ್ಳಿ ಗೆರೆ ಸೃಷ್ಟಿಸಿ,
ಹಕ್ಕಿಗಳ ಕಲರವದಲ್ಲಿ ತಂಪಾದ ತಂಗಾಳಿ ಬೀಸಿ,
ಸುಪ್ತ ಮನಸ್ಸನ್ನು ಸಪ್ತ ಸಮುದ್ರಗಳಾಚೆ ಕದ್ದೊಯ್ಯುವವ...

ಸಂದೀಪನೆಂದರೆ ಸುಂದರ romantic ಸಂಜೆ... ಸಂದೀಪನೆಂದರೆ "ಸಂಧ್ಯಾಕಾಲ"ದ ಪ್ರೀತಿಯ "ದೀಪ"...

"ಸಂದೀಪ"ನೆಂದರೆ ಮಲೆನಾಡಿನ ವರ್ಷಧಾರೆ...
ಆಕಾಶದಲ್ಲಿ ಮೋಡಗಳನ್ನು ಸೃಷ್ಟಿಸಿ,
ಮಿಂಚುಗಳ ಬಳ್ಳಿಗಳನ್ನು ಶೋಭಿಸಿ,
ತಂಪಾದ ಮಳೆಯನ್ನೂ ಭೂಮಿಗೆ ಸುರಿಸಿ,
ಒಣಗಿ ಹೋದ ಮಣ್ಣಿನ ಕಣಗಳಲ್ಲಿ ಪರಿಮಳವನ್ನು ಘಮಘಮಿಸಿ,
ಮನಸ್ಸು ಆ ಸುಂದರ ವಾತಾವರಣದಲ್ಲಿ ನರ್ತಿಸುವಂತೆ ಮಾಡುವವ...

ಸಂದೀಪನೆಂದರೆ "ವರ್ಷಧಾರೆ"ಯಲ್ಲಿ ಪ್ರೀತಿಯ "ಹರ್ಷಧಾರೆ" ಹರಿಸುವವ....

Tuesday, September 29, 2009

ಮಾಯಾಲೋಕದಲ್ಲಿ ಮಿಂಚಿಹೋದ ಮಿನುಗು ತಾರೆ - ಕಲ್ಪನಾ ಚಾವ್ಲಾ



ಕಲ್ಪನೆಯ ಕಲ್ಪನಾ ಲೋಕದಲ್ಲಿ ಕಲ್ಪಿಸಿದೆ ಕಲ್ಪನಾ
ನೀನಾದೆ ಜಗತ್ತಿನ ಬಹು ಜನರ ಆರಾಧನಾ
ಬಹು ಭಾರತಿಯ ಯುವ ಜನತೆಯ ಪ್ರೇರಣ
ಸಾಧನೆಗಾಗಿ ನೀ ಮುಡಿಪಿಟ್ಟೆ ನಿನ್ನ ಜೀವನ.

ಭಾರತದ ಒಂದು ಪುಟ್ಟ ಹಳ್ಳಿ ಕರ್ನಲ್ನಲ್ಲಿ ಜನನ
ಕನಸು ಕಂಡ ಕೊಲಂಬಿಯಾದಲ್ಲಿ ಮರಣ
ಭಾರತ ಕಳೆದುಕೊಂಡಿತು ನಿನ್ನಂಥ ಹೆಮ್ಮೆಯ ಮಗಳನ್ನ
ಆದರೂ ಸುನಿತಾಳ ಸಾಧನೆಗಾಗಿ ಎಲ್ಲೋ ಒಂದು ಪ್ರಾರ್ಥನಾ.

ಸಾಧನೆಗಾಗಿ ನೀ ಆರಿಸಿಕೊಂಡದ್ದು ದೂರದ ಅಮೆರಿಕಾವನ್ನ
ಅದು ನಿನಗೆ ನೀಡಿದ್ದು ನೌಕೆಯಲ್ಲಿಯ ದುರ್ಮರಣ.
ನೀ ಎಂದೂ ಮರೆಯಲಿಲ್ಲ ನಿನ್ನ ತಾಯ್ನಾಡಿನ ಮಮಕಾರವನ್ನ
ಭಾರತಾಂಬೆಯ ಮಡಿಲಲ್ಲಿ ಹುಟ್ಟಿ ಬರಲಿ ನಿನ್ನಂಥ ನೂರು ಜನ ..

This Poem was awarded with second place during the "best young poet" competition by Ashwini Prakashan Gadag in 2007.